March 22, 2026
IMG-20240813-WA0027

ಮಂಗಳೂರು :NSUI ದ.ಕ ಜಿಲ್ಲಾ ಅಧ್ಯಕ್ಷರಾದ ಸುಹನ್ ಅಳ್ವರವರ ಸಮ್ಮುಖದಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ NSUI ವಿದ್ಯಾರ್ಥಿ ಸಂಘಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದ ಉದ್ದೇಶಿಸಿ ಮಾತಾಡಿದ ಜಿಲ್ಲಾ ಅಧ್ಯಕ್ಷರಾದಸುಹನ್ ಅಳ್ವ ‘ ವಿದ್ಯಾರ್ಥಿಗಳ ಕಷ್ಟಕ್ಕೆ NSUI ಸದಾ ಸಿದ್ಧ ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗೆ ನಾವು ಸಿದ್ಧರಾಗಿರುತ್ತೇವೆ’ ಎಂದರು.

ಕರ್ನಾಟಕ ರಾಜ್ಯ NSUI ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿಯಾದ ಝಾಕೀರ್ ಹುಸೇನ್,ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಮೌಸೀರ್ ಸಾಮಣಿಗೆ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು..

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ NSUI ಪ್ರಧಾನ ಕಾರ್ಯದರ್ಶಿ ಬಾತೀಷ್ ಅಳಕೆಮಜಲು,NSUI ಮುಖಂಡರಾದ ತನುಷ್ ಶೆಟ್ಟಿ, NSUI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಕೀರ್ತನ್ ಕೊಡಪಾಲ, ನಜೀಬ್ ಮಂಚಿ,ಸುಖ್ವಿಂದರ್ ಸಿಂಗ್,ಐರಿನ್ ಟೆಲ್ಲಿಸ್,ಪ್ರಧಾನ ಕಾರ್ಯದರ್ಶಿ ಆಶಿಕ್ ಆರಂತೋಡು,ಮುಹೈಮಿನ್ ಕೆಂಪಿ,ರೋನ್ಟನ್,ಸೋಹಾನ್,ಫಾರೂಕ್,ಸಲ್ಮಾನ್,NSUI ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ‌ ಅಧ್ಯಕ್ಷರಾದ ಕ್ರಿಸ್ಟನ್ ಮಿನೇಜಸ್,ಉಳ್ಳಾಲ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಾಹಿಲ್ ಮಂಚಿಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.