February 5, 2026

ಉಪವಾಸ ಇದ್ದರೂ ಕಾರ್ಯಾಚರಣೆಗೆ ತೆರಳಿದ ಯುವಕನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಪಾಣೆಮಂಗಳೂರಿನ ಸೇತುವೆಯಿಂದ ವ್ಯಕ್ತಿ ನದಿಗೆ ಹಾರಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯ ರಸ್ತೆ ನಿವಾಸಿ ಶಂಕರಯ್ಯ (50) ಎಂದು ಗುರುತಿಸಲಾಗಿದೆ.

ನದಿಗೆ ಹಾರಿದ ಮಾಹಿತಿ ಪಡೆದ ಸ್ಥಳೀಯ ಈಜುಗಾರ ಸಿದ್ದೀಕ್ ಎಂ ಕೆ.ರೋಡ್ ರವರು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದರೆ.

ಉಪವಾಸ ಇದ್ದರೂ ಕಾರ್ಯಾಚರಣೆಗೆ ತೆರಳಿದ ಯವಕನ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಂಕರಯ್ಯ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಕೂಡ ಯುವಕನೊಬ್ಬ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಸ್ಥಳೀಯ ಯುವಕರ ತಂಡ ಆ ಯುಕನನ್ನು ರಕ್ಷಿಸಿತ್ತು.