February 4, 2026
IMG-20251115-WA0003

ಮಂಗಳೂರು: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ದುಂರತ ಸಾವಿಗೀಡಾದ ಘಟನೆ ನಡೆದಿದೆ.

ಬೆಂಗಳೂರು ಸೇರಿ ದೇಶದ ಹಲವು ಕಡೆಗಳಲ್ಲಿ ಮಕ್ಕಳನ್ನು ಗುರಿಯಾಗಿಸಿ ಬೀದಿ ನಾಯಿಗಳು ದಾಳಿ ನಡೆಸಿದ್ದನ್ನು ಕೇಳಿದ್ದೇವೆ. ಕೆಲವು ಕಡೆ ಮಕ್ಕಳು ಸಾವು ಕಂಡಿದ್ದ ಸುದ್ದಿಯನ್ನೂ ನೋಡಿದ್ದೇವೆ. ಆದರೆ ಸುಶಿಕ್ಷಿತರ ನಾಡು ಎಂದೆನಿಸಿರುವ ಮಂಗಳೂರಿನಲ್ಲಿ ಕುಡಿತದ ಚಟವಿದ್ದ ವ್ಯಕ್ತಿಯೊಬ್ಬ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ದುರಂತ ಸಾವು ಕಂಡಿದ್ದಾನೆ. ಸಾಮಾನ್ಯವಾಗಿ ಬೀದಿ ನಾಯಿಗಳು ಒಬ್ಬಂಟಿ ಮಕ್ಕಳು ಸಿಕ್ಕರೆ ದಾಳಿ ಮಾಡುವುದಿರುತ್ತದೆ. ಆದರೆ ದೊಡ್ಡವರ ಮೇಲೆ ದಾಳಿ ಮಾಡಿದರೂ ಓಡಿ ತಪ್ಪಿಸಿಕೊಳ್ಳುವುದರಿಂದ ಯಾರೂ ಮೃತಪಟ್ಟ ಉದಾಹರಣೆ ಇಲ್ಲ.

ಮಂಗಳೂರು ಹೊರವಲಯದ ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲದಲ್ಲಿ ಶುಕ್ರವಾರ ನಸುಕಿನ ವೇಳೆಗೆ 50 ವರ್ಷದ ದಯಾನಂದ ಗಟ್ಟಿ ಎಂಬ ವ್ಯಕ್ತಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದು ವಿಪರ್ಯಾಸ ಅಷ್ಟೇ ಅಲ್ಲ, ಈ ಜಿಲ್ಲೆಯ ಜನರು ನಾಚಿಕೆಪಡುವಂಥ ಸುದ್ದಿ. ದಯಾನಂದ ಗಟ್ಟಿ ತೀವ್ರ ಕುಡಿತದ ಚಟವುಳ್ಳ ವ್ಯಕ್ತಿಯಾಗಿದ್ದು ನಸುಕಿನ ಮೂರು ಗಂಟೆ ವೇಳೆಗೆ ಹಾಲಿನ ವಾಹನದವರು ಅವರನ್ನು ಅದೇ ಪರಿಸರದಲ್ಲಿ ಕಂಡಿದ್ದರಂತೆ. ಆದರೆ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸ್ಥಳೀಯರು ನೋಡಿದಾಗ, ಅಲ್ಲಿಯೇ ಲಾಂಡ್ರಿ ಅಂಗಡಿಯ ಮುಂಭಾಗದಲ್ಲಿ ಕಣ್ಣು ಗುಡ್ಡೆ ಕಿತ್ತೋಗಿ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.