

ಚಿಕ್ಕೋಡಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದ್ದು ದುಡ್ಡು ಕೊಟ್ಟರೇ ಮಾತ್ರ ವರ್ಕ ಆರ್ಡರ್ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಆಕ್ರೋಶ ಹೊರಹಾಕಿದ್ದಾರೆ.
ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ಮಾತನಾಡಿದ ಅವರು, ಕಾಮಗಾರಿ ವರ್ಕ್ ಆರ್ಡರ್ ಪಡೆಯಲು ಸರ್ಕಾರದಿಂದ ವಿಳಂಬ ಆಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ 75 ಸಮುದಾಯದ ಭವನಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ ಎರಡು ವರ್ಷದಿಂದ ವರ್ಕ್ ಆರ್ಡರ್ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ರಾಜೀನಾಮೆ ಸಲ್ಲಿಸಿದರೆ ಅಚ್ಚರಿಯಿಲ್ಲ ಬಿ ಆರ್ ಪಾಟೀಲ್ ಅವರಂತ ಪರಿಸ್ಥಿತಿ ನನ್ನದಾಗಿದೆ. ಬಿ ಆರ್ ಪಾಟೀಲ್ ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಸರಕಾರದ ವಿರುದ್ದವೇ ಬಹಿರಂಗವಾಗಿ ಕಿಡಿಕಾರಿದರು.