June 24, 2025
k.-ashraf

ಮಂಗಳೂರು: ಶ್ರೀರಂಗ ಪಟ್ಟಣದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಶಾಸಕ ಬಂಡಿ ಸಿದ್ದೇಗೌಡ ಸಾರ್ವಜನಿಕವಾಗಿ ಹೇಳಿಕೆ ನೀಡಿ, ಕಾನೂನಾತ್ಮಕ ಸವಲತ್ತು ಆದ ಬಗರ್ ಹೂಕುಮ್ ಅರ್ಜಿದಾರರ ವಿರುದ್ಧ ರೈತರು ನೀಡಿದ ಆಕ್ಷೇಪಕ್ಕೆ ಸಂಬಂಧಿಸಿ ಅಧಿಕಾರಿಯನ್ನು ಸಾರ್ವಜನಿಕವಾಗಿ ಬೈದು, ಒಂದು ನಿರ್ಧಿಷ್ಟ ಸಮುದಾಯ ಮುಸ್ಲಿಮ್ ಅಲ್ಪ ಸಂಖ್ಯಾತ ಜನಾಂಗವನ್ನು ಸಾಬರು ಎಂದು ಸಂಬೋಧಿಸಿ ಅವಮಾನ ಮಾಡಿದ್ದಾರೆ, ಅಧಿಕಾರಿಯ ಹತ್ತಿರ ಸಾಬ್ರಿಗೆ ಭೂಮಿ ನೀಡಿದರೆ ನೇಣಿಗೆ ಹಾಕುತ್ತೇನೆ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದಾರೆ.

ರಮೇಶ್ ಬಂಡಿ ಸಿದ್ದೇಗೌಡ ಓರ್ವ ಶಾಸಕರಾಗಿ, ಸರಕಾರದ ಸವಲತ್ತು ಅಪೇಕ್ಷಣೆ ಮಾಡುವುದು ಪ್ರತಿ ಪ್ರಜೆಯ ಸಾಂವಿಧಾನಿಕ ಹಕ್ಕು, ಅದನ್ನು ಆಕ್ಷೇಪಿಸುವುದು ಕೂಡ ರೈತರ ಸಾಂವಿಧಾನಿಕ ಹಕ್ಕು, ಆದರೆ ಫಲಾನುಭವಿಗಳು ಮುಸ್ಲಿಮ್ ಎಂಬ ಕಾರಣಕ್ಕಾಗಿ ಅವರನ್ನು ಸಾಬರು ಎಂದು ಉಲ್ಲೇಖಿಸಿರುವುದು ಮತ್ತು ಅಧಿಕಾರಿಯನ್ನು ನೇಣಿಗೆ ಹಾಕುತ್ತೇನೆ ಎಂದು ಹೇಳಿಕೆ ನೀಡಿರುವುದು ಖಂಡನೀಯ.

ರಮೇಶ್ ಬಂಡಿ ಸಿದ್ದೇಗೌಡ ಫಲಾನುಭವಿಗಳಿಗೆ ತನ್ನ ಕುಟುಂಬದ ಹಿರಿಯರ ಆಸ್ತಿಯನ್ನು ಹಂಚುವುದು ಅಲ್ಲ, ಮತ್ತು ಅಧಿಕಾರಿಗಳು ರಮೇಶ್ ಬಂಡಿ ಸಿದ್ದೇಗೌಡರ ಮನೆಯ ಗುಲಾಮರು ಏನಲ್ಲ, ಅಧಿಕಾರಿ ಸಾರ್ವಜನಿಕ ಸೇವಕ. ಶಾಸಕರಾಗಿ ತಾನು ಓರ್ವ ಜನಪ್ರತಿನಿಧಿಯಾಗಿ, ಅಧಿಕಾರಿಗಳಿಗೆ ಸಲಹೆ ನಿರ್ದೇಶನ ನೀಡಬಹುದೇ ಹೊರತು ದರ್ಪ ಪ್ರದರ್ಷಿಸುವಂತಿಲ್ಲ. ರಮೇಶ್ ಬಂಡಿ ಸಿದ್ದೇಗೌಡ ಕರ್ನಾಟಕದ ಪಾಳೆಗಾರ ಅಥವಾ ನಾಡಿನ ಹಿಟ್ಲರ್ ಆಗುವುದು ಬೇಡ!, ಬಂಡಿ ಸಿದ್ದೇಗೌಡ ತನ್ನ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟು ಮಾತನಾಡಲಿ. ಅಧಿಕಾರದ ದರ್ಪದಿಂದ ನಾಲಗೆಯನ್ನು ಹರಿಯ ಬಿಡುವುದನ್ನು ನಿಯಂತ್ರಿಸಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.